WELCOME TO OUR BLOG SPANDANA. THIS BLOG DOCUMENTS THE ACTIVITIES RELATED TO THE RELIEF WORK AT THE WAKE OF 2ND WAVE OF CORONA INFECTION CONDUCTED BY THE JESUITS AND THEIR PARTNERS IN THOSE PLACES WHERE JESUITS ARE PHYSICALLY PRESENT WITHIN THE TERRITORY OF KARNATAKA. WE FIRMLY BELIEVE IN THE WORDS OF JESUS CHRIST: "HEAL THE SICK, RAISE THE DEAD, CLEANSE THOSE WHO HAVE LEPROSY, DRIVE OUT DEMONS. FREELY YOU HAVE RECEIVED; FREELY GIVE" (MATHEW 10:8).

Friday 14 May 2021

ನಮ್ಮ ಹರಿಹರ, ನಮ್ಮ ದಾವಣಗೆರೆ ಸುರಕ್ಷಿತವಾಗಿರಿಸೋಣ.

ನಮ್ಮ ಹರಿಹರ, ನಮ್ಮ ದಾವಣಗೆರೆ ಸುರಕ್ಷಿತವಾಗಿರಿಸೋಣ.

ಕೋವಿಡ್-19ವಿರುದ್ಧದ ಹೋರಾಟದಲ್ಲಿ ಸಂತ ಅಲೋಶಿಯಸ್ ಕಾಲೇಜು ನಿಮ್ಮ ಜೊತೆ.

ಹರಿಹರ :ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೋನಾ ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು,ನಮ್ಮ ಕರ್ನಾಟಕವೂ ಇದರಿಂದ ಅಕ್ಷರಶಃ ನಲುಗಿಹೋಗಿದೆ.ಅಪಾರ ಸಾವು ನೋವುಗಳು ದಿನೇದಿನೇ ಸಂಭವಿಸುತ್ತಿದ್ದು ಇದರ ವಿರುದ್ಧ ಸಮರೋಪಾದಿಯಲ್ಲಿ ಹೋರಾಡಬೇಕಿದೆ.ಈ ನಿಟ್ಟಿನಲ್ಲಿ ನಮ್ಮ ಹರಿಹರ ನಮ್ಮ ದಾವಣಗೆರೆಯನ್ನು ಈ ಸಾಂಕ್ರಾಮಿಕ ಪಿಡುಗಿನಿಂದ ಸುರಕ್ಷಿತವಾಗಿರಿಸುವುದಕ್ಕಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಹರಿಹರ  ಜನರಿಗಾಗಿ ತನ್ನ ಮಾನವೀಯ ಸೇವೆಯನ್ನು ನೀಡಲು ಸಿದ್ಧವಾಗಿದೆ.ಈಗಾಗಲೇ "ಸ್ಪಂದನ" ಶೀರ್ಷಿಕೆಯಡಿಯಲ್ಲಿ 

24X7 ಸನ್ನದ್ಧ ತಂಡ ಕಾರ್ಯಾಚರಿಸುತ್ತಿದ್ದು ಸಹಾಯವಾಣಿಯನ್ನು ತೆರೆದಿದೆ.

ನಮ್ಮಲ್ಲಿ ಲಭ್ಯವಿರುವ ಸೇವೆಗಳು :

1.ಹರಿಹರ- ದಾವಣಗೆರೆ ಆಸುಪಾಸಿನ ಜನರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ.

2.ಆಪ್ತ ಸಮಾಲೋಚನೆ (ಕೌನ್ಸೆಲಿಂಗ್)

3.ಆಧ್ಯಾತ್ಮಿಕ ಹಾಗೂ ನೈತಿಕ ಬೆಂಬಲ 

4. ಮಾಸ್ಕ್ ವಿತರಣೆ 

5.ಕೊರೋನಾ ವಾರಿಯರ್ಸ್ ಗಳಾದ  *ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರಿಗೆ ಆಹಾರ ವಿತರಣೆ.

6.ಕಡುಬಡವರು, ನಿರ್ಗತಿಕರು, ಸಂಕಷ್ಟಕ್ಕೆ ಒಳಗಾದವರಿಗೆ ಆಹಾರ ಸಾಮಗ್ರಿಗಳ  ವಿತರಣೆ.

"ನಿಮ್ಮ ಸ್ಪಂದನವೇ ನಮ್ಮ ಇಂಧನ"

ಸಹಾಯಕ್ಕಾಗಿ ಸಂಪರ್ಕಿಸಿ:

7338655141,9901189201

9036486863,9449625563

No comments:

Post a Comment